ಉಪ್ಪಳ:ನಕಲಿ ವೈದ್ಯನೋರ್ವನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪಾಲಕ್ಕಾಡ್ ಮಣ್ಣಾರ್ ಕ್ಕಾಡ್ ನ ಸಿ.ಎಂ.ಜಮಾಲುದ್ದೀನ್(56) ಬಂಧಿತ ಆರೋಪಿ. ಉಪ್ಪಳ ಪಚ್ಲಂಪಾರೆಯಿಂದ ಈತನನ್ನು ಬಂಧಿಸಲಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.
ಪಚ್ಲಂಪರೆಯಲ್ಲಿ ಕ್ಲಬ್ ವತಿಯಿಂದ ಆಯೋಜಿಸಿದ್ದ ವೈದ್ಯಕೀಯ ಶಿಬಿರದಲ್ಲಿ ಈತ ತಪಾಸಣೆ ಹಾಗೂ ಚಿಕಿತ್ಸೆಯನ್ನು ನೀಡಿದ್ದನು.