ತಿರುವನಂತಪುರಂ: ಮಲಪ್ಪುರಂನಲ್ಲಿ ಚಿನ್ನ ಕಳ್ಳಸಾಗಣೆ ಮತ್ತು ಹವಾಲಾ ವಹಿವಾಟಿನಿಂದ ಪಡೆದ ಹಣವನ್ನು ದೇಶವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೀಡಿರುವ ಬಹಿರಂಗ ಹೇಳಿಕೆಗೆ ಸಂಬಂಧಿಸಿ ರಾಜ್ಯಪಾಲರು ವಿಷದ ವಿವರಗಳಿಗಾಗಿ ರಾಜಭವನಕ್ಕೆ ಕರೆದಿದ್ದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಹಾಜರಾಗಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. .
ಸರ್ಕಾರಕ್ಕೆ ಮಾಹಿತಿ ನೀಡದೆ ಅಧಿಕಾರಿಗಳನ್ನು ಕರೆಸುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ ಎಂದು ಮುಖ್ಯಮಂತ್ರಿಗಳು ರಾಜ್ಯಪಾಲರಿಗೆ ಪತ್ರ ರವಾನಿಸಿದ್ದಾರೆ.
ಇಂದು ನಾಲ್ಕು ಗಂಟೆಗೆ ರಾಜಭವನಕ್ಕೆ ಬಂದು ವಿವರಣೆ ನೀಡಲು ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿಗೆ ರಾಜ್ಯಪಾಲರು ಸೂಚಿಸಿದ್ದು, ಅದನ್ನು ಒಪ್ಪಲಾಗÀದು ಎಂಬುದು ಸರ್ಕಾರದ ನಿಲುವಾಗಿದೆ. ರಾಜ್ಯಪಾಲರ ಕ್ರಮ ಕಾನೂನು ಬಾಹಿರವಾಗಿದ್ದು, ರಾಜ್ಯಪಾಲರಿಗೆ ನೇರವಾಗಿ ಮುಖ್ಯ ಕಾರ್ಯದರ್ಶಿಯನ್ನು ಕರೆಸುವ ಅಧಿಕಾರವಿಲ್ಲ, ಮುಖ್ಯಮಂತ್ರಿಗೆ ಮನವಿ ಮಾತ್ರ ಸಲ್ಲಿಸಬಹುದು ಎಂಬ ವಾದವನ್ನು ಸರ್ಕಾರ ಎತ್ತುತ್ತಿದೆ.
ಮಲಪ್ಪುರಂ ಉಲ್ಲೇಖ ಮತ್ತು ಪಿ.ವಿ.ಅನ್ವರ್ ಅವರ ಪೋನ್ ಹ್ಯಾಕಿಂಗ್ ಆರೋಪದ ಕುರಿತು, ಎರಡೂ ವಿಷಯಗಳ ಬಗ್ಗೆ ರಾಜ್ಯಪಾಲರು ಕೋರಿದ ವರದಿಯನ್ನು ಸರ್ಕಾರ ಇನ್ನೂ ನೀಡಿಲ್ಲ. ನಾಲ್ಕು ದಿನಗಳ ಹಿಂದೆ ಸಚಿವರ ಸಂದರ್ಶನದಲ್ಲಿ ‘ಚಿನ್ನದ ಕಳ್ಳಸಾಗಣೆ ಮತ್ತು ದೇಶವಿರೋಧಿ ಚಟುವಟಿಕೆಗಳು’ ಎಂಬ ಟೀಕೆಗಳಿಗೆ ರಾಜ್ಯಪಾಲರು ವಿವರಣೆ ಕೇಳಿದ್ದರು. ದೇಶವಿರೋಧಿಗಳು ಯಾರು ಮತ್ತು ದೇಶವಿರೋಧಿ ಚಟುವಟಿಕೆಯನ್ನು ಏಕೆ ಬಹಿರಂಗಪಡಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ರಾಜ್ಯಪಾಲರು ಪತ್ರದಲ್ಲಿ ಸೂಚಿಸಿದ್ದರು.
ಈ ಬಗ್ಗೆ ಯಾವಾಗ ಗೊತ್ತಾಯಿತು ಮತ್ತು ಇದರ ಹಿಂದೆ ಯಾರಿದ್ದಾರೆ ಎಂದು ಪತ್ರದಲ್ಲಿ ಕೇಳಲಾಗಿದೆ. ಆದರೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ರಾಜ್ಯಪಾಲರು ಡಿಜಿಪಿ ಹಾಗೂ ಮುಖ್ಯ ಕಾರ್ಯದರ್ಶಿಗೆ ಖುದ್ದು ಹಾಜರಾಗುವಂತೆ ಸೂಚಿಸಿದ್ದರು.