HEALTH TIPS

ಪಾಕಿಸ್ತಾನ | ಗುಂಡಿನ ದಾಳಿ: ಗುರುನಾನಕ್ ಜಯಂತಿಗೆ ಹೊರಟಿದ್ದ ಹಿಂದೂ ಯಾತ್ರಿಕ ಸಾವು

Top Post Ad

Click to join Samarasasudhi Official Whatsapp Group

Qries

         ಲಾಹೋರ್: ಗುರುನಾನಕ್‌ ಅವರ 555ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದಲ್ಲಿರುವ ನಾನ್ಕನಾ ಸಾಹಿಬ್‌ ನಗರಕ್ಕೆ ತೆರಳುತ್ತಿದ್ದ ಹಿಂದೂ ಯಾತ್ರಿಕರೊಬ್ಬರನ್ನು ದರೋಡೆಕೋರರ ಗುಂಪೊಂದು ಗುಂಡಿಟ್ಟು ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.ರಾಜೇಶ್‌ ಕುಮಾರ್‌ ಮೃತ ಯಾತ್ರಿಕ.

         ಸಿಂಧ್‌ ಪ್ರಾಂತ್ಯದ ಲಾರ್ಕನಾ ನಗರದ ನಿವಾಸಿ ರಾಜೇಶ್‌ ಅವರು ಕಾರಿನಲ್ಲಿ ತಮ್ಮ ಸ್ನೇಹಿತರೊಂದಿಗೆ ತೆರಳುತ್ತಿದ್ದ ವೇಳೆ ಮೂವರು ದರೋಡೆಕೋರರು ಕಾರನ್ನು ಅಡ್ಡಗಟ್ಟಿದ್ದಾರೆ. ಬಂದೂಕುದಾರಿಯೊಬ್ಬ ಮೂವರಿಂದ 4,50,000 ಪಾಕಿಸ್ತಾನ ರೂಪಾಯಿಯನ್ನು ದೋಚಿದ್ದು ಚಾಲಕನಿಂದಲೂ ಹಣವನ್ನು ದೋಚಿದ್ದಾರೆ. ಬಳಿಕ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ರಾಜೇಶ್‌ ತೀವ್ರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

             ರಾಜೇಶ್‌ ಅವರ ಜತೆಗಿದ್ದವರ ಹೇಳಿಕೆಯ ಆಧಾರದ ಮೇಲೆ ಅಪರಿಚಿತ ವ್ಯಕ್ತಿಯ ವಿರುದ್ಧ ಸ್ಥಳೀಯ ಪೊಲೀಸರು ದೂರು ದಾಖಲಿಸಿದ್ದಾರೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries