ತಿರುವನಂತಪುರಂ: ಜನವರಿ ತಿಂಗಳ ಪಡಿತರ ವಿತರಣೆಯನ್ನು ಫೆಬ್ರವರಿ 4 ರವರೆಗೆ ವಿಸ್ತರಿಸಲಾಗಿದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಜಿ.ಆರ್ ಅನಿಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಫೆಬ್ರವರಿ 5 ರಂದು ಮಾಸಾಂತ್ಯದ ದಾಸ್ತಾನು ಇರುವುದರಿಂದ ಪಡಿತರ ವ್ಯಾಪಾರಿಗಳಿಗೆ ರಜೆ ಇರುತ್ತದೆ. ಫೆಬ್ರವರಿ ತಿಂಗಳ ಪಡಿತರ ವಿತರಣೆ ಫೆಬ್ರವರಿ 6 ರಿಂದ ಆರಂಭವಾಗಲಿದೆ.
ಗುರುವಾರ ಸಂಜೆ 5 ಗಂಟೆಯ ಹೊತ್ತಿಗೆ, ಶೇ. 68.71 ರಷ್ಟು ಕಾರ್ಡುದಾರರು ತಮ್ಮ ಪಡಿತರವನ್ನು ಪಡೆದಿದ್ದಾರೆ. ಮೊನ್ನೆಯμÉ್ಟೀ 2,51,795 ಕಾರ್ಡ್ದಾರರು ಮತ್ತು ನಿನ್ನೆ (ಸಂಜೆ 5 ಗಂಟೆಯವರೆಗೆ) 2,23,048 ಕಾರ್ಡ್ದಾರರು ಪಡಿತರ ಪಡೆದಿದ್ದಾರೆ. ಸಾರಿಗೆ ಗುತ್ತಿಗೆದಾರರ ಮುಷ್ಕರದಿಂದಾಗಿ ಆಹಾರ ಧಾನ್ಯಗಳ ಮನೆ ಬಾಗಿಲಿಗೆ ವಿತರಣೆಯನ್ನು ಪೂರ್ಣಗೊಳಿಸುವಲ್ಲಿ ವಿಳಂಬವಾಯಿತು. ಆದರೆ ಕಳೆದ ಐದು ದಿನಗಳಿಂದ ಮನೆ ಬಾಗಿಲಿಗೆ ವಿತರಣೆ ಸರಾಗವಾಗಿ ನಡೆಯುತ್ತಿದೆ.
ರಾಜ್ಯದ ಎಲ್ಲಾ ಪಡಿತರ ಅಂಗಡಿಗಳಲ್ಲಿ ಸಾಕಷ್ಟು ದಾಸ್ತಾನು ಇದೆ. ಈ ಪರಿಸ್ಥಿತಿಯಲ್ಲಿ, ಜನವರಿ ತಿಂಗಳ ಪಡಿತರವನ್ನು ಪಡೆಯಲಿರುವ ಎಲ್ಲಾ ಕಾರ್ಡ್ದಾರರು ಫೆಬ್ರವರಿ 4 ರ ಮೊದಲು ತಮ್ಮ ಪಡಿತರವನ್ನು ಪಡೆಯಬೇಕು ಎಂದು ಸಚಿವರು ತಿಳಿಸಿರುವರು.