HEALTH TIPS

ಕೇರಳ ರಾಜ್ಯಪಾಲರಾದ ನಂತರ ಪ್ರಧಾನಿ ಮತ್ತು ಉಪರಾಷ್ಟ್ರಪತಿಗಳನ್ನು ಭೇಟಿಯಾದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್

ನವದೆಹಲಿ: ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರನ್ನು ನಿನ್ನೆ ಭೇಟಿಯಾದರು.

ಕೇರಳ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿಯೊಂದಿಗಿನ ಅವರ ಮೊದಲ ಭೇಟಿ ಇದಾಗಿದೆ. ತಮ್ಮ ಮೊದಲ ಭೇಟಿಯ ಸಮಯದಲ್ಲಿ, ರಾಜ್ಯಪಾಲರು ಪ್ರಧಾನ ಮಂತ್ರಿಯವರಿಗೆ  ಸುಂದರವಾದ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದರು.

ಅವರು ಪ್ರಧಾನ ಮಂತ್ರಿಯವರೊಂದಿಗೆ ಅಲ್ಪ ಹೊತ್ತು ಚರ್ಚಿಸಿದರು. ಸಭೆಯ ಚಿತ್ರಗಳನ್ನು ಪ್ರಧಾನಿ ಕಚೇರಿಯ ಅಧಿಕೃತ ಟ್ವಿಟರ್ ಖಾತೆ ಮತ್ತು ಕೇರಳ ರಾಜ್ಯಪಾಲರ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಇದು ಸೌಹಾರ್ದ ಭೇಟಿಯಾಗಿತ್ತು ಎಂದು ವರದಿಯಾಗಿದೆ. ಉಪರಾಷ್ಟ್ರಪತಿಯವರೊಂದಿಗಿನ ಭೇಟಿಯ ಚಿತ್ರಗಳನ್ನು ರಾಜ್ ಭವನ ಎಕ್ಸ್ ಖಾತೆಯ ಮೂಲಕವೂ ಬಿಡುಗಡೆ ಮಾಡಲಾಗಿದೆ.

ರಾಜೇಂದ್ರ ಅರ್ಲೇಕರ್ ಜನವರಿ 2 ರಂದು ಕೇರಳದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದರು. ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರನ್ನು ಬಿಹಾರದ ರಾಜ್ಯಪಾಲರನ್ನಾಗಿ ನೇಮಿಸಿದ ನಂತರ ಅರ್ಲೇಕರ್ ಕೇರಳ ಜವಾಬ್ದಾರಿ ನೀಡಲಾಗಿತ್ತು. ಅವರು ಕೇರಳದ 23 ನೇ ರಾಜ್ಯಪಾಲರು.

ಗೋವಾ ಮೂಲದ ಅರ್ಲೇಕರ್, ಗೋವಾ ವಿಧಾನಸಭೆಯ ಮಾಜಿ ಸ್ಪೀಕರ್ ಮತ್ತು ಗೋವಾದಲ್ಲಿ ಮಾಜಿ ಸಚಿವರಾಗಿದ್ದರು. ಬಳಿಕ, ಅವರನ್ನು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ನೇಮಿಸಲಾಗಿತ್ತು.  ಅಲ್ಲಿಂದ ಅವರು ಫೆಬ್ರವರಿ 2023 ರಲ್ಲಿ ಬಿಹಾರದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries