HEALTH TIPS

ಚುನಾವಣಾ ಆಯೋಗದ ಕಾರ್ಯವಿಧಾನದ ಪರಾಮರ್ಶಿಸಲು 'ಈಗಲ್‌' ರಚಿಸಿದ ಕಾಂಗ್ರೆಸ್‌

ನವದೆಹಲಿ: ಚುನಾವಣಾ ಆಯೋಗದ ಕಾರ್ಯವಿಧಾನವನ್ನು ಪರಾಮರ್ಶಿಸಲು 'ನಾಯಕರ ಹಾಗೂ ತಜ್ಞರ ಪರಮಾಧಿಕಾರ ಕಾರ್ಯಪಡೆ'ಯೊಂದನ್ನು (ಎಂಪವರ್ಡ್‌ ಆಯಕ್ಷನ್‌ ಗ್ರೂಪ್‌ ಆಫ್‌ ಲೀಡರ್ಸ್‌ ಆಯಂಡ್‌ ಎಕ್ಸ್‌ಪರ್ಟ್ಸ್‌-ಈಗಲ್‌) ಕಾಂಗ್ರೆಸ್‌ ಭಾನುವಾರ ರಚಿಸಿದೆ.

ಅಜಯ್‌ ಮಾಕನ್‌, ದಿಗ್ವಿಜಯ ಸಿಂಗ್‌, ಅಭಿಶೇಕ್‌ಮನು ಸಿಂಘ್ವಿ, ಪ್ರವೀಣ್‌ ಚಕ್ರವರ್ತಿ, ಪವನ್‌ ಖೇರಾ, ಗುರ್ದೀಪ್‌ ಸಿಂಗ್‌ ಸಪ್ಪಾಲ್‌, ನಿತಿನ್‌ ರಾವುತ್‌ ಮತ್ತು ಚಲ್ಲಾ ವಂಶಿ ಚಂದ್‌ ರೆಡ್ಡಿ- ಈ ಪಡೆಯ ಸದಸ್ಯರು.

ಈ ಪಡೆಯು ತಕ್ಷಣದಿಂದಲೇ ಕಾರ್ಯಾರಂಭ ಆಗುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆದೇಶ ಹೊರಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭೆ ಚುನಾವಣೆಯ ಕುರಿತು ಈ ಪಡೆಯು ಆದಷ್ಟು ಬೇಗ ವರದಿ ನೀಡಲಿದೆ. ದೆಹಲಿ ವಿಧಾನಸಭೆ ಚುನಾವಣೆ ಸೇರಿ ಮುಂಬರುವ ಎಲ್ಲ ಚುನಾವಣೆಗಳ ವೇಳೆ ಆಯೋಗದ ಕಾರ್ಯವಿಧಾನವನ್ನು ಈ ಪಡೆ ಪರಾಮರ್ಶಿಸಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries