HEALTH TIPS

ಕೇರಳ ವಿಧಾನ ಸಭೆಯಲ್ಲಿ ಕಯ್ಯಾರ ಕವನ ವಾಚಿಸಿ ಅವಗಣನೆಯ ವಿರುದ್ದ ಗುಡುಗಿದ ಶಾಸಕ ಎ.ಕೆ.ಎಂ.

ತಿರುವನಂತಪುರಂ : ಕೇರಳ ವಿಧಾನ ಸಭೆಯಲ್ಲಿ ಬಜೆಟಿನ ಮೇಲಿನ ಚರ್ಚೆ ಆರಂಭಗೊಂಡಿದ್ದು, ನಿನ್ನೆಯ ಬಿಸಿಯೇರಿದ ಚರ್ಚೆಯಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅವರು ತೀವ್ರ ಸ್ವರೂಪದಲ್ಲೊ ಕಾಸರಗೋಡಿನ ಅವಗಣನೆ ವಿರುದ್ದ ಹರಿಹಾಯ್ದರು.
ಕಯ್ಯಾರರ ಕವನ ವಾಚಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಮಂಜೇಶ್ವರ ಶಾಸಕರು  ಗಮನಸೆಳೆದರು. ಬಹು ನಿರೀಕ್ಷಿಯಿಂದ ಕಂಡ ಕೇರಳ ರಾಜ್ಯ ಬಜೆಟಿನಲ್ಲಿ ಕಾಸರಗೋಡು ಜಿಲ್ಲೆ ಹಾಗೂ ಮಂಜೇಶ್ವರ ವಿಧಾನಸಭಾ ಕ್ಷೇತ್ರವನ್ನು ಸಂಪೂರ್ಣವಾಗಿ ಅವಗಣಿಸಿರುವುದನ್ನು ಶಾಸಕರು ತೀವ್ರವಾಗಿ ಖಂಡಿಸಿದರು. ಗಡಿನಾಡಿನ ಜನರು ಕೇಂದ್ರ ಕೇರಳ ಹಾಗೂ ಹತ್ತಿರದ ಕರ್ನಾಟಕ ರಾಜ್ಯದ ಬಜೆಟ್ ಗಳನ್ನು ಗಮನಿಸುವವರು. ಗ್ಯಾರಂಟಿಗಳ ಮೂಲಕ ಜನರ ದೈನಂದಿನ ಬದುಕಿನಲ್ಲಿ ಭರವಸೆಯನ್ನು ತುಂಬಿದ ಕರನಾಟಕದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರಗಳ ಜನಕಲ್ಯಾಣ ಯೋಜನೆಗಳನ್ನು ಬಗ್ಗೆ ಶಾಸಕರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ನಿರಂತರವಾಗಿ ಗಡಿನಾಡು ಮಂಜೇಶ್ವರ ಹಾಗೂ ಕಾಸರಗೋಡು ಜಿಲ್ಲೆಯನ್ನು ಸರ್ಕಾರವು ಅವಗಣಿಸುವುದು ಸರಿಯಲ್ಲ. ಇದು ಒಂದು ಪ್ರದೇಶದ, ಜನರ ಬಗ್ಗೆ ಸರ್ಕಾರ ತೋರುವ ಅನ್ಯಾಯವೆಂದು ಶಾಸಕರು ಕಿಡಿ ಕಾರಿದ್ದಾರೆ.

ಈ ವೇಳೆ ದಶಕಗಳ ಹಿಂದೆಯೇ ಕಾಸರಗೋಡು ಕೇರಳಕ್ಕೆ ಸೇರ್ಪಡೆಯಾದಾಗ ಮುಂದೆ ಬರುವ ಸಮಸ್ಯೆ-ಸವಾಲುಗಳನ್ನು ಗ್ರಹಿಸಿ  ಕವಿ, ನಾಡೋಜ ಕೈಯಾರರ " ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ" ಎಂಬ ಕ್ರಾಂತಿಯ ಕಿಡಿ ಹಬ್ಬಿಸಿದ ಕವಿತೆ ಹಾಡುವುದರ ಮೂಲಕ  ವಿಧಾನಸಭೆಯ ಪೂರ್ಣ ಗಮನವನ್ನು ಸೆಳೆದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries