HEALTH TIPS

ಅರ್ಧ ಬೆಲೆ ಹಗರಣ: ವಿದೇಶಕ್ಕೆ ಪರಾರಿಯಾಗಿದ್ದ ಕಾಂಗ್ರೆಸ್ ಮಹಿಳಾ ನಾಯಕಿಯ ಮನೆಗೆ ಬೀಗ ಜಡಿದ ಇ.ಡಿ.

ತೊಡುಪುಳ: ಅರ್ಧ ಬೆಲೆ ವಂಚನೆ ಪ್ರಕರಣದಲ್ಲಿ ಕುಮಿಳಿ ಪಂಚಾಯತಿ ಮಾಜಿ ಅಧ್ಯಕ್ಷೆ ಮತ್ತು ಮಹಿಳಾ ಕಾಂಗ್ರೆಸ್ ಇಡುಕ್ಕಿ ಜಿಲ್ಲಾ ಕಾರ್ಯದರ್ಶಿ ಶೀಬಾ ಸುರೇಶ್ ಅವರ ಕುಮಿಳಿಯಲ್ಲಿರುವ ಮನೆಗೆ ಜಾರಿ ನಿರ್ದೇಶನಾಲಯವು ಸೀಲ್ ಹಾಕಿದೆ.


ವಂಚನೆ ಬಹಿರಂಗವಾದ ನಂತರ ಶೀಬಾ ವಿದೇಶಕ್ಕೆ ತೆರಳಿರುವರು. ಅವರು ಈ ಯೋಜನೆಯಲ್ಲಿ ಅನೇಕ ಜನರನ್ನು ಸೇರಿಸಿಕೊಂಡಿದ್ದಾರೆ. ಇದರ ನಂತರ, ಇಡಿ ಪ್ರಕರಣವನ್ನು ಕೈಗೆತ್ತಿಕೊಂಡಿತು. ಶೀಬಾ ವಿವಿಧ ಜಿಲ್ಲೆಗಳ ಉಸ್ತುವಾರಿ ವಹಿಸಿದ್ದರು ಎಂದು ವರದಿಯಾಗಿದೆ. ಶೀಬಾ ವಿದೇಶದಲ್ಲಿರುವ  ಕಾರಣ ಮನೆಯನ್ನು ಸೀಲ್ ಮಾಡಲಾಗಿಯಿತು.

ಸ್ಕೂಟರ್‍ಗಳು, ಲ್ಯಾಪ್‍ಟಾಪ್‍ಗಳು ಮತ್ತು ಗೃಹೋಪಯೋಗಿ ಉಪಕರಣಗಳನ್ನು ಅರ್ಧ ಬೆಲೆಗೆ ನೀಡಿ ಸುಮಾರು 500 ಕೋಟಿ ರೂ.ಗಳಷ್ಟು ದುರುಪಯೋಗಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕೇರಳದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ. ಈ ಯೋಜನೆಯ ಹಿಂದಿನ ಮಾಸ್ಟರ್ ಮೈಂಡ್ ಅನಂತು ಕೃಷ್ಣನ್, ಪ್ರಮುಖ ಸರ್ಕಾರೇತರ ಸಂಸ್ಥೆ ಶ್ರೀ ಸತ್ಯ ಸಾಯಿ ಅನಾಥಾಶ್ರಮ ಟ್ರಸ್ಟ್‍ನ ಅಧ್ಯಕ್ಷ ಕೆ.ಎನ್. ಆನಂದಕುಮಾರ್ ಮತ್ತು ಅನಂತು ಕೃಷ್ಣನ್ ಅವರ ಕಾನೂನು ಸಲಹೆಗಾರ ಕಾಂಗ್ರೆಸ್ ನಾಯಕಿ ಲಾಲಿ ವಿನ್ಸೆಂಟ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ. ರಾಜ್ಯ ಅಪರಾಧ ವಿಭಾಗವು ಪ್ರಕರಣಗಳನ್ನು ದಾಖಲಿಸಿದ ನಂತರ ಸಿಎಸ್ಆರ್ ನಿಧಿಯ ಸೋಗಿನಲ್ಲಿ ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆಯೇ ಎಂಬುದರ ಕುರಿತು ಇಡಿ ಮುಖ್ಯವಾಗಿ ತನಿಖೆ ನಡೆಸುತ್ತಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries