HEALTH TIPS

ಮಾಲೀಕರ ಬಳಕೆಗೆ ಜಮೀನು ಸಿಗದಂತೆ ಮಾಡಬಾರದು: ಸುಪ್ರೀಂ ಕೋರ್ಟ್

ನವದೆಹಲಿ: ಜಮೀನು ಮಾಲೀಕನಿಗೆ ತನ್ನ ಜಮೀನು ಅನಿರ್ದಿಷ್ಟ ಅವಧಿಗೆ ಬಳಕೆಗೆ ಸಿಗದಂತೆ ಮಾಡುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಈಚೆಗೆ ಹೇಳಿದೆ.

ಬಾಂಬೆ ಹೈಕೋರ್ಟ್ ನೀಡಿದ ಆದೇಶವೊಂದನ್ನು ರದ್ದುಪಡಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಆರ್.ಮಹಾದೇವನ್ ಅವರು ಇರುವ ವಿಭಾಗೀಯ ಪೀಠವು ಈ ಮಾತು ಹೇಳಿದೆ.

'ಜಮೀನು ಮಾಲೀಕನಿಗೆ ಅದನ್ನು ಬಳಸಲು ಅನಿರ್ದಿಷ್ಟಾವಧಿಗೆ ಸಾಧ್ಯವಾಗದಂತೆ ಮಾಡಬಾರದು. ಜಮೀನನ್ನು ನಿರ್ದಿಷ್ಟ ಬಗೆಯಲ್ಲಿ ಬಳಸಬಾರದು ಎಂಬ ನಿರ್ಬಂಧವನ್ನು ಹೇರಿದ ನಂತರದಲ್ಲಿ, ಆ ನಿರ್ಬಂಧವು ಅನಿರ್ದಿಷ್ಟ ಅವಧಿಗೆ ಮುಂದುವರಿಯಬಾರದು' ಎಂದು ಪೀಠವು ಹೇಳಿದೆ.

ಮಹಾರಾಷ್ಟ್ರ ಪ್ರಾದೇಶಿಕ ಮತ್ತು ಪಟ್ಟಣ ಯೋಜನಾ ಕಾಯ್ದೆ - 1966ನ್ನು ಉಲ್ಲೇಖಿಸಿದ ಪೀಠವು, ಅಭಿವೃದ್ಧಿ ಯೋಜನೆಯಲ್ಲಿ ಜಾಗವೊಂದನ್ನು 33 ವರ್ಷಗಳವರೆಗೆ ಮೀಸಲಾಗಿ ಇರಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries