ನವದೆಹಲಿ: ದೇಶಕ್ಕೆ ಅಪಾರ ಕೊಡುಗೆ ನೀಡಿರುವ ಮಾಜಿ ಪ್ರಧಾನಿ, ದಿವಂಗತ ಮನಮೋಹನ ಸಿಂಗ್ ಅವರಿಗೆ 'ಭಾರತ ರತ್ನ'ವನ್ನು ಏಕೆ ಕೊಟ್ಟಿಲ್ಲ ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಅವರು ಸೋಮವಾರ ರಾಜ್ಯಸಭೆಯಲ್ಲಿ ಪ್ರಶ್ನಿಸಿದರು.
ಚಿದಂಬರಂ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ಸಂಸದ ದಿನೇಶ್ ಶರ್ಮಾ, 'ಕಾಂಗ್ರೆಸ್, ಸಿಂಗ್ ಅವರಿಗೆ ಅಪಮಾನ ಮಾಡುವುದನ್ನು ಬಿಟ್ಟು ಬೇರೆ ಇನ್ನೇನು ನೀಡಿದೆ' ಎಂದರು.
ಕೇಂದ್ರ ಬಜೆಟ್ 2025-26ರ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಚಿದಂಬರಂ, 'ಆಡಳಿತಾರೂಢ ಸರ್ಕಾರಕ್ಕೆ ಯಾವುದೇ ತತ್ವವಿಲ್ಲ. ಆದ್ದರಿಂದ ಯಾವುದೇ ನೀತಿಗಳು ಇಲ್ಲ' ಎಂದು ದೂರಿದರು.