HEALTH TIPS

ಕಾಂಗ್ರೆಸ್‍ಗೆ ಎಂದಿಗೂ ನಾಯಕತ್ವದ ಕೊರತೆ ಎದುರಾಗಿಲ್ಲ: ಕೆ ಮುರಳೀಧರನ್- ತರೂರ್ ಅವರ ಸಮಸ್ಯೆ ಅರ್ಥವಾಗುತ್ತಿಲ್ಲ:ಪ್ರತಿಕ್ರಿಯೆ

ತಿರುವನಂತಪುರಂ: ಶಶಿ ತರೂರ್ ಅವರ ಮನಸ್ಸಿನಲ್ಲಿ ಏನಾದರೂ ಇದ್ದರೆ, ಅವರು ಅದನ್ನು ಪರಿಹರಿಸಿಕೊಳ್ಳಬೇಕು ಮತ್ತು ಹಾಗಿದ್ದರೆ ನಾವಿದ್ದೇವೆ ಎಂದು ಕಾಂಗ್ರೆಸ್ ನಾಯಕ ಕೆ. ಮುರಳೀಧರನ್ ಹೇಳಿದ್ದಾರೆ.

ಯಾರೂ ಪಕ್ಷ ಬಿಡಬಾರದು. ಎಲ್ಲರೂ ಪಕ್ಷದೊಳಗೆ ಇರಬೇಕು. ಅವರಿಗೆ ಯಾವುದೇ ತೊಂದರೆ ಇದ್ದರೆ, ಅವರೇ ಅದನ್ನು ಪರಿಹರಿಸಬೇಕು. ತರೂರ್‍ಗೆ ಈಗ ಏನಾಗಿದೆ ಎಂದು ನನಗೆ ತಿಳಿದಿಲ್ಲ ಎಂದು ಕೆ. ಮುರಳೀಧರನ್ ಹೇಳಿದರು.


ಪಕ್ಷದ ಮತಗಳ ಜೊತೆಗೆ ಹೊರಗಿನ ಮತಗಳನ್ನು ಪಡೆಯುವ ಮೂಲಕ ಪ್ರತಿಯೊಬ್ಬರೂ ಪ್ರತಿ ಚುನಾವಣೆಯಲ್ಲಿ ಗೆಲ್ಲುತ್ತಾರೆ. ಆದರೆ ಪಕ್ಷದ ಕಾರ್ಯಕರ್ತರು ಅದಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಎ. ಚಾಲ್ರ್ಸ್ 1984, 1989 ಮತ್ತು 1991 ರಲ್ಲಿ ತಿರುವನಂತಪುರಂನಿಂದ ಗೆದ್ದಿದ್ದರು. ತಾನು(ಮುರಳೀಧರನ್) ಕೂಡ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೆ ಮಾತ್ರ ಗೆಲ್ಲಲು ಸಾಧ್ಯ ಎಂದು ಹೇಳಿದರು.

ಕೇರಳದಲ್ಲಿ ಕಾಂಗ್ರೆಸ್‍ಗೆ ಎಂದಿಗೂ ನಾಯಕತ್ವದ ಕೊರತೆ ಎದುರಾಗಿಲ್ಲ ಎಂದು ಕೆ ಮುರಳೀಧರನ್ ಸ್ಪಷ್ಟಪಡಿಸಿದರು. ಪಕ್ಷದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಎಲ್ಲರೂ ಅರ್ಹರೇ. ರಾಹುಲ್ ಗಾಂಧಿ ಎಂದಿಗೂ ತರೂರ್ ಅವರನ್ನು ಕೆಟ್ಟ ವ್ಯಕ್ತಿಯಂತೆ ಚಿತ್ರಿಸಿಲ್ಲ ಅಥವಾ ಅವರನ್ನು ಅವಹೇಳನ ಮಾಡಿಲ್ಲ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಪಕ್ಷಕ್ಕೆ ಅವರ ಸೇವೆಗಳು ಅಗತ್ಯವಾಗಿವೆ.

ಪಕ್ಷವು ಎಲ್ಲಾ ವರ್ಗಗಳನ್ನು ಒಳಗೊಂಡಿದೆ ಎಂದು ಮುರಳೀಧರನ್ ಎಂದು ಹೇಳಿರುವರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries