HEALTH TIPS

ನಜಾಫಗಢವನ್ನು ನಹಾರ್‌ಗಢವಾಗಿ ಬದಲಿಸುತ್ತೇವೆ: ದೆಹಲಿ ಬಿಜೆಪಿ ಶಾಸಕ

ನವದೆಹಲಿ: ನೈರುತ್ಯ ದೆಹಲಿಯಲ್ಲಿರುವ ನಜಾಫಗಢವನ್ನು ನಹಾರ್‌ಗಢವನ್ನಾಗಿ ಬದಲಿಸುವ ಪ್ರಸ್ತಾಪವನ್ನು ಬಿಜೆಪಿ ಶಾಸಕ ನೀಲಂ ಪಹಲ್ವಾನ್ ಗುರುವಾರ ಮುಂದಿಟ್ಟಿದ್ದಾರೆ. 

ಮೂಲ ಹೆಸರನ್ನು ಮೊಘಲರು ಬದಲಾಯಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ದೆಹಲಿ ವಿಧಾನಸಭೆ ಪ್ರವೇಶಕ್ಕೆ ಎಎಪಿ ಶಾಸಕರಿಗೆ ನಿರ್ಬಂಧ: ಆತಿಶಿ ಆರೋಪ

ಇತ್ತೀಚೆಗೆ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ನಜಾಫಗಢ ಕ್ಷೇತ್ರದಿಂದ ಅವರು ಗೆಲುವು ಸಾಧಿಸಿದ್ದರು.

ಮೊಘಲ್ ದೊರೆ ಎರಡನೇ ಅಲಂ ಆಡಳಿತದಲ್ಲಿ ನಜಾಫಗಢ ಭಾರಿ ಸಮಸ್ಯೆಗಳನ್ನು ಎದುರಿಸಿತ್ತು. 1857ರ ದಂಗೆಯ ವೇಳೆ ರಾಜ ನಹಾರ್ ಸಿಂಗ್ ಯುದ್ಧ ಮಾಡಿ ನಜಾಫಗಢವನ್ನು ದೆಹಲಿ ಪ್ರಾಂತ್ಯಕ್ಕೆ ಸೇರಿಸಿದ. ನಜಾಫಗಢವನ್ನು ನಹಾರ್‌ಗಢವನ್ನಾಗಿ ಬದಲಿಸಲು ನಾವು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇವೆ. ಹೆಸರು ಬದಲಿಸುವ ಪ್ರಸ್ತಾಪವನ್ನು ಕ್ಷೇತ್ರದ ಜನರು ಬೆಂಬಲಿಸಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಪ್ರದೇಶಗಳ ಹೆಸರು ಬದಲಿಸುವ ಹೇಳಿಕೆಗಳು ಬಿರುಸು ಪಡೆದಿವೆ. ಮುಸ್ತಫಾಬಾದ್‌ನಲ್ಲಿ ಗೆಲುವು ಸಾಧಿಸಿರುವ ಬಿಜೆಪಿಯ ಮೋಹನ್ ಸಿಂಗ್ ಬಿಶ್ತ್, ತಮ್ಮ ಕ್ಷೇತ್ರವನ್ನು ಶಿವಪುರಿ ಅಥವಾ ಶಿವ ವಿಹಾರ ಎಂದು ಬದಲಿಸುವುದಾಗಿ ಹೇಳಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries