ಮಂಜೇಶ್ವರ: ಕಾರುಗಳು ಪರಸ್ಪರ ಢಿಕ್ಕಿ ಹೊಡೆದು ಆ ಬಗ್ಗೆ ಪೋಲೀಸರು ಪರಿಶೀಲನೆ ಆರಂಭಿಸಿದಾಗ ಢಿಕ್ಕಿ ಹೊಡೆದು ಕಾರೊಂದರಲ್ಲಿ 25,88,000 ರೂ. ಪತ್ತೆಯಾಗಿದೆ. ಮಂಜೇಶ್ವರ ಪೇಟೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಹಣ್ಣು ಹಂಪಲು ಹೇರಿಕೊಂಡು ಬರುತ್ತಿದ್ದ ಕಾರಿನಲ್ಲಿ ಹಣ ಪತ್ತೆಯಾಗಿದೆ.
ಹಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ಪತ್ರಗಳಿಲ್ಲದಿದ್ದುದರಿಂದ ಹಣವನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ಈ ಹಣವನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೋಲೀಸರು ತಿಳಿಸಿದ್ದಾರೆ. ಈ ಹಣಕ್ಕೆ ಸಂಬಂಧಿಸಿ ದಾಖಲೆ ಪತ್ರಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಲ್ಲಿ ಹಣ ಅವರಿಗೆ ವಾಪಸು ಲಭಿಸಲಿದೆ ಎಂದೂ, ಇಲ್ಲದಿದ್ದಲ್ಲಿ ಸರ್ಕಾರದ ಖಜಾನೆಗೆ ಸೇರಲಿದೆ ಎಂದು ಪೋಲೀಸರು ತಿಳಿಸಿದ್ದಾರೆ.