HEALTH TIPS

ಅಪಘಾತಕ್ಕೀಡಾದ ಕಾರಿನಲ್ಲಿ 25 ಲಕ್ಷ ರೂ. ಪತ್ತೆ

Top Post Ad

Click to join Samarasasudhi Official Whatsapp Group

Qries

ಮಂಜೇಶ್ವರ: ಕಾರುಗಳು ಪರಸ್ಪರ ಢಿಕ್ಕಿ ಹೊಡೆದು ಆ ಬಗ್ಗೆ ಪೋಲೀಸರು ಪರಿಶೀಲನೆ ಆರಂಭಿಸಿದಾಗ ಢಿಕ್ಕಿ ಹೊಡೆದು ಕಾರೊಂದರಲ್ಲಿ 25,88,000 ರೂ. ಪತ್ತೆಯಾಗಿದೆ. ಮಂಜೇಶ್ವರ ಪೇಟೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಹಣ್ಣು ಹಂಪಲು ಹೇರಿಕೊಂಡು ಬರುತ್ತಿದ್ದ ಕಾರಿನಲ್ಲಿ ಹಣ ಪತ್ತೆಯಾಗಿದೆ.

ಹಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ಪತ್ರಗಳಿಲ್ಲದಿದ್ದುದರಿಂದ ಹಣವನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ಈ ಹಣವನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೋಲೀಸರು ತಿಳಿಸಿದ್ದಾರೆ. ಈ ಹಣಕ್ಕೆ ಸಂಬಂಧಿಸಿ ದಾಖಲೆ ಪತ್ರಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಲ್ಲಿ ಹಣ ಅವರಿಗೆ ವಾಪಸು ಲಭಿಸಲಿದೆ ಎಂದೂ, ಇಲ್ಲದಿದ್ದಲ್ಲಿ ಸರ್ಕಾರದ ಖಜಾನೆಗೆ ಸೇರಲಿದೆ ಎಂದು ಪೋಲೀಸರು ತಿಳಿಸಿದ್ದಾರೆ. 


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries