HEALTH TIPS

ಎಂತ ಕಷ್ಟದ ಜನರು ಮಾರಾಯ್ರೆ- ಬಾಂಬ್ ಬೆದರಿಕೆ ಸಂದೇಶ ನೋಡಿದ್ದು ಒಂದು ದಿನದ ನಂತರ: ಬಳಿಕ ಪರಿಶೀಲನೆ ಪ್ರಹಸನ

ಕಲ್ಪೆಟ್ಟ: ವಯನಾಡು ಕಲೆಕ್ಟರೇಟ್‍ಗೆ ಬಾಂಬ್ ಬೆದರಿಕೆ ಸಂದೇಶ ಬಂದ ಒಂದು ದಿನದ ನಂತರ ತಪಾಸಣೆ ನಡೆಸಲಾಗಿದೆ. ಬೆದರಿಕೆ ಇಮೇಲ್ ಸಂದೇಶವು ಉದ್ಯೋಗಿಗಳ ಗಮನಕ್ಕೆ ಬಾರದೆ ಹೋದ ಕಾರಣ ಈ ಪರಿಸ್ಥಿತಿ ಉಂಟಾಗಿದೆ.

ಮೊನ್ನೆ ಬೆಳಿಗ್ಗೆ ಕಳುಹಿಸಲಾದ ಬೆದರಿಕೆ ಸಂದೇಶವನ್ನು ನೌಕರರು ನಿನ್ನೆ ಸಂಜೆಯಷ್ಟೇ ಗಮನಿಸಿದರು. ನಂತರ ಪೋಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ "ಧಾವಿಸಿ" ಕಲೆಕ್ಟರೇಟ್ ಅನ್ನು ಪರಿಶೀಲಿಸಿದರು.

ಮೊನ್ನೆ ಕೊಲ್ಲಂ ಮತ್ತು ತಿರುವನಂತಪುರಂ ಕಲೆಕ್ಟರೇಟ್‍ಗಳಿಗೆ ಬಂದ ನಕಲಿ ಬಾಂಬ್ ಬೆದರಿಕೆಗಳ ಜೊತೆಗೆ, ವಯನಾಡ್ ಕಲೆಕ್ಟರೇಟ್‍ಗೂ ಬೆದರಿಕೆ ಸಂದೇಶ ತಲುಪಿದೆ. ಆದರೆ, ತನಿಖೆಯಲ್ಲಿ ಕೊಲ್ಲಂ ಮತ್ತು ತಿರುವನಂತಪುರಂಗೆ ಬಂದ ಬೆದರಿಕೆಗಳು ನಕಲಿ ಎಂದು ತಿಳಿದುಬಂದಿದೆ. ಬೆದರಿಕೆ ಸಂದೇಶ ಬಂದ ಒಂದು ದಿನದ ನಂತರ ಇಮೇಲ್ ಅನ್ನು ಓದಿದ ವಯನಾಡಿನ ಅಧಿಕಾರಿಗಳ ಕ್ರಮವನ್ನು ಟೀಕಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries