HEALTH TIPS

ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಬ್ರಹ್ಮಕಲಶೋತ್ಸವ ಉಪ ಸಮಿತಿ ರಚನೆ

Top Post Ad

Click to join Samarasasudhi Official Whatsapp Group

Qries

ಕುಂಬಳೆ: ಅಂಗಡಿಮೊಗರು ಸಮೀಪದ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಬ್ರಹ್ಮಕಲಶೋತ್ಸವದ  ಸಮಿತಿ ಮಹಾಸಭೆ ಹಾಗೂ ಉಪ ಸಮಿತಿ ರಚನೆ ಕ್ಷೇತ್ರ ಸಭಾಭವನದಲ್ಲಿ ಬುಧವಾರ ಜರಗಿತು. 

ಸಮಿತಿ ಅಧ್ಯಕ್ಷ  ಕಾರ್ಯಕ್ರಮವನ್ನು ಹಿರಿಯ ಧಾರ್ಮಿಕ ಮುಂದಾಳು ಉದಯಶಂಕರ ಭಟ್ ಕರೋಡಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗಿರಿಧರ್ ಶೆಟ್ಟಿ ಮಂಗಳೂರು ಅಧ್ಯಕ್ಷತೆ ವಹಿಸಿದ್ದರು.


ಕ್ಷೇತ್ರ ಆಡಳಿತ ಮೊಕ್ತೇಸರÀ ನ್ಯಾಯವಾದಿ ಇಚ್ಲಂಪಾಡಿ ಸುಬ್ಬಯ್ಯ ರೈ,ಮುಗು ಶ್ರೀ ಸುಬ್ರಾಯ ಕ್ಷೇತ್ರ ಆಡಳಿತ ಮೊಕ್ತೇಸರ ರವೀಂದ್ರನಾಥ್ ನಾಯಕ್ ಶೇಣಿ, ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ, ಪೈವಳಿಕೆ ಗ್ರಾ.ಪಂ.ಸದಸ್ಯ ಆಶೋಕ್ ಭಂಡಾರಿ, ಎಂ.ಎನ್.ಮಯ್ಯ, ಪಟ್ಲ ದಾಮೋಧರ ಶೆಟ್ಟಿ, ಬಾಲಸುಬ್ರಹ್ಮಣ್ಯ ಭಟ್ ಚಕ್ಕಣಿಕೆ, ಉಮಾನಾಥ ಭಂಡಾರಿ ಪುತ್ತಿಗೆ, ಶಂಕರ ರೈ ಮಾಸ್ತರ್, ಅಶೋಕ್ ಮಾಸ್ತರ್ ಬಾಡೂರು,ವೇಣುಗೋಪಾಲ ಶೆಟ್ಟಿ, ಗಿರೀಶ್ ಭಟ್ ಪುತ್ತಿಗೆ, ಅಮರನಾಥ ರೈ ಚೀಂಕಣಮೊಗರು, ಸುಂದರ ಶೆಟ್ಟಿ ಭಂಡಾರಗುತ್ತು ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಉಪ ಸಮಿತಿಗಳನ್ನು ರಚಿಸಲಾಯಿತು. ಸೇವಾ ಸಮಿತಿ ಅಧ್ಯಕ್ಷ ಡಿ.ದಾಮೋದರ್ ಸ್ವಾಗತಿಸಿ, ಕೇಶವ ಮಾಸ್ತರ್ ವಂದಿಸಿದರು. ಡಿ.ರಾಜೇಂದ್ರ ರೈ ನಿರೂಪಿಸಿದರು.



Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries