HEALTH TIPS

ತೆಲಂಗಾಣ| ಅಕ್ರಮ ವಹಿವಾಟು ತಡೆಯುತ್ತೇವೆ ಎನ್ನುತ್ತಾ ಸೈಬರ್‌ ವಂಚನೆ ಎಸಗಿದ ಕಂಪನಿ

ಹೈದರಾಬಾದ್‌: 'ನಿಮ್ಮ ಖಾತೆಯಲ್ಲಿ ಅನಧಿಕೃತವಾಗಿ ವಹಿವಾಟು ನಡೆಸಲಾಗುತ್ತಿದೆ. ಇದನ್ನು ತಡೆಯಲು ನಿಮ್ಮ ಹಣವನ್ನೆಲ್ಲಾ ಈ 'ಸುರಕ್ಷಿತ ಖಾತೆ'ಗೆ ವರ್ಗಾಯಿಸಿ. ಇಲ್ಲವೆ ನಿಮ್ಮ ಬ್ಯಾಂಕ್‌ ವಿವರಗಳನ್ನು ನೀಡಿ ನಾವು ಅಕ್ರಮವನ್ನು ತಡೆಯುತ್ತೇವೆ' ಎಂದು ಹೇಳಿಕೊಂಡು ಸೈಬರ್‌ ವಂಚನೆ ನಡೆಸುತ್ತಿದ್ದವರನ್ನು ತೆಲಂಗಾಣ ಸೈಬರ್‌ ಭದ್ರತಾ ಬ್ಯೂರೊ (ಟಿಜಿಸಿಎಸ್‌ಬಿ) ಬಂಧಿಸಿದೆ.

'ಎಕ್ಸಿಟೊ ಸೊಲ್ಯೂಷನ್ಸ್‌' ಎನ್ನುವ ಹೈದರಾಬಾದ್‌ನ ಕಂಪನಿಯು ಈ ಅಪರಾಧಗಳನ್ನು ಎಸಗುತ್ತಿತ್ತು. ತಮ್ಮ ಮೂಲಗಳು ಒದಗಿಸಿದ ಮಾಹಿತಿ ಮೇರೆಗೆ ತೆಲಂಗಾಣ ಸೈಬರ್‌ ಪೊಲೀಸರು ಬುಧವಾರ ರಾತ್ರಿ ಈ ಕಂಪನಿಯ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 63 ಮಂದಿಯನ್ನು ಬಂಧಿಸಲಾಗಿದೆ.

'ಅಮೆರಿಕದಲ್ಲಿ ವಾಸಿಸುತ್ತಿರುವವರು ಮತ್ತು 'ಪೇಪಾಲ್‌' ಎನ್ನುವ ಆನ್‌ಲೈನ್‌ ಹಣಕಾಸು ವಹಿವಾಟು ವೇದಿಕೆ ಬಳಕೆದಾರರು ಈ ಅಪರಾಧಿಗಳ ಮುಖ್ಯ ಗುರಿಯಾಗಿದ್ದಾರೆ. ಈಶಾನ್ಯ ರಾಜ್ಯದವರೇ ಇಲ್ಲಿ ಹೆಚ್ಚಾಗಿ ಕೆಲಸ ಮಾಡುತ್ತಿದ್ದಾರೆ. ಇವರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕ ಮಾಡಲಾಗಿದೆ' ಎಂದು ಟಿಜಿಸಿಎಸ್‌ಬಿ ನಿರ್ದೇಶಕ ಶಿಖಾ ಗೋಯಲ್‌ ಗುರುವಾರ ಮಾಹಿತಿ ನೀಡಿದರು.

'ಕಾಲ್‌ ಸೆಂಟರ್‌ ಹೆಸರಿನಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ. ತಿಂಗಳಿಗೆ ₹ 30 ಸಾವಿರ ಕೊಡುವುದಾಗಿ ಹೇಳಲಾಗಿದೆ. ಹೈದರಾಬಾದ್‌ಗೆ ಬಂದ ಮೇಲೆ ಫೇಕ್‌ಕಾಲ್‌ ಮಾಡುವುದು ಹೇಗೆ ಎನ್ನುವ ಕುರಿತು ಈ ಎಲ್ಲರಿಗೂ ತರಬೇತಿ ನೀಡಲಾಗಿದೆ. ಬಂಧಿತರಿಂದ 52 ಮೊಬೈಲ್‌, 63 ಲ್ಯಾಪ್‌ಟಾಪ್‌, ಕಂಪನಿಯ 27 ಗುರುತಿನ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ' ಎಂದು ವಿವರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries