HEALTH TIPS

ವಿಶಾಲಾಕ್ಷಿ ಅಡೆಕಳಕಟ್ಟೆ ಯವರಿಗೆ ರಾಜ್ಯ ಪ್ರಶಸ್ತಿ

Top Post Ad

Click to join Samarasasudhi Official Whatsapp Group

Qries

ಮಂಜೇಶ್ವರ: 2024 ನೇ ಸಾಲಿನ ರಾಜ್ಯಮಟ್ಟದ ಶ್ರೇಷ್ಠ ಅಂಗನವಾಡಿ ಕಾರ್ಯಕರ್ತೆಯರಿಗಿರುವ ಪ್ರಶಸ್ತಿಯನ್ನು ಪಡೆದು ಅತ್ಯುತ್ತಮ ಅಂಗನವಾಡಿ ಶಿಕ್ಷಕಿ ಎಂಬ ಗೌರವವನ್ನು ಮೀಂಜ ಗ್ರಾಮ ಪಂಚಾಯತಿ ಕೋಳ್ಯೂರು ವಾರ್ಡ್ ನ ದೈಗೋಳಿ ಅಂಗನವಾಡಿ ಶಿಕ್ಷಕಿ ವಿಶಾಲಾಕ್ಷಿ ಅವರು ಪಡೆದಿರುತ್ತಾರೆ. ಮಾರ್ಚ್ 8 ರಂದು ತಿರುವನಂತಪುರದಲ್ಲಿ ಜರಗಿದ ಸಮಾರಂಭದಲ್ಲಿ ಕೇರಳ ರಾಜ್ಯ ಮಹಿಳಾ ನಿಗಮದ ಅಧ್ಯಕ್ಷೆÀ ರೋಸಾಕುಟ್ಟಿ ಕೆ.ಸಿ  ಅವರಿಂದ ಪ್ರಶಸ್ತಿ ಸ್ವೀಕರಿಸಿದರು. 

ದೈಗೋಳಿ ಅಡೆಕಳಕಟ್ಟೆ ನಿವಾಸಿಯಾದ ವಿಶಾಲಾಕ್ಷಿ ಅವರು ಕಳೆದ 27 ವರ್ಷಗಳಿಂದ ಅಂಗನವಾಡಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ದೈಗೋಳಿ ಜ್ಞಾನೋದಯ ಸಮಾಜ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಕ್ರಿಯ ಸದಸ್ಯೆಯಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಜ್ಞಾನೋದಯ ಸಮಾಜ ಅಭಿನಂದನೆಗಳನ್ನು ಸಲ್ಲಿಸಿದೆ. 



Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries