ಕಲ್ಪೆಟ್ಟ: ವಯನಾಡ್ನಲ್ಲಿ ಕಳೆದ ವರ್ಷ ಸಂಭವಿಸಿದ ಭೂಕುಸಿತದಿಂದಾಗಿ ನಿರಾಶ್ರಿತರಾದವರಿಗೆ ಪುನರ್ವಸತಿ ಕಲ್ಪಿಸಲು ಕೇಂದ್ರ ಸರ್ಕಾರ ಯಾವುದೇ ನೆರವು ನೀಡಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗುರುವಾರ ಹೇಳಿದ್ದಾರೆ.
ಕೆಂದ್ರ ಸರ್ಕಾರವು ₹529.50 ಕೋಟಿ ಸಾಲ ಮಂಜೂರು ಮಾಡಿರುವುದನ್ನು ಉಲ್ಲೇಖಿಸಿದ ಪಿಣರಾಯಿ, 'ಸಾಲವಾಗಿ ನೀಡಿರುವ ಹಣವು ಅಗತ್ಯಕ್ಕಿಂತ ಕಡಿಮೆ ಇದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿರಾಶ್ರಿತರ ಪುನರ್ವಸತಿಗಾಗಿ ಮಾದರಿ 'ಟೌನ್ಶಿಪ್' ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, 'ಕೇಂದ್ರದ ಜೊತೆಗಿನ ಹಿಂದಿನ ಅನುಭವಗಳಿಂದಾಗಿ ಪಾಠ ಕಲಿತಿರುವ ನಾವು ಅವರಿಂದ ಹೆಚ್ಚಿನದನ್ನು ನಿರೀಕ್ಷಿಸುವುದಿಲ್ಲ' ಎಂದು ಹೇಳಿದ್ದಾರೆ.
ಸರ್ಕಾರವು ಸ್ವಾಧೀನಪಡಿಸಿಕೊಂಡಿರುವ 64 ಹೆಕ್ಟೇರ್ ಪ್ರದೇಶದಲ್ಲಿ 'ಟೌನ್ಶಿಪ್' ನಿರ್ಮಾಣವಾಗಲಿದ್ದು, ತಲಾ 7 ಸೆಂಟ್ಸ್ ಜಾಗದಲ್ಲಿ 100 ಚದರ ಅಡಿಯ ಮನೆಯನ್ನು ನಿರ್ಮಿಸಲಾಗುತ್ತದೆ.
ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉಪಸ್ಥಿತರಿದ್ದರು.
ವಯನಾಡ್ ನಿರಾಶ್ರಿತರ ಪುನರ್ವಸತಿಗಾಗಿ ಕೇಂದ್ರ ಸರ್ಕಾರ ನೀಡಿರುವ ನೆರವು ನಗಣ್ಯ.
-ಪ್ರಿಯಾಂಕಾ ಗಾಂಧಿ ವಯನಾಡ್ ಸಂಸದೆ