ಕೊಚ್ಚಿ: ಅರ್ಧ ಬೆಲೆಗೆ ವಾಹನ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಸಾಯಿಗ್ರಾಮ ಟ್ರಸ್ಟ್ ಅಧ್ಯಕ್ಷ ಆನಂದಕುಮಾರ್ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಆನಂದಕುಮಾರ್ ಅವರ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಪಿ.ವಿ.ಕುಂಞÂಕೃಷ್ಣನ್ ನೇತೃತ್ವದ ಏಕ ಪೀಠ ತಿರಸ್ಕರಿಸಿತು.
ಅರ್ಧ ಬೆಲೆ ವಂಚನೆ ಪ್ರಕರಣದಲ್ಲಿ ಆನಂದಕುಮಾರ್ ಎರಡನೇ ಆರೋಪಿ. ಮೊದಲ ಆರೋಪಿ ಅನಂತು ಕೃಷ್ಣನ್ ಹೇಳಿಕೆಯಲ್ಲಿ ಆನಂದ್ ಕುಮಾರ್ ವಂಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗಿದೆ.
ಸಿಎಸ್ಆರ್ ನಿಧಿಯನ್ನು ಸಂಗ್ರಹಿಸಲು ರಚಿಸಲಾದ ಸಂಘಟನೆಯಾದ ಕಾನ್ಫೆಡರೇಶನ್ ಆಫ್ ಎನ್ಜಿಒಗಳ ಅಧ್ಯಕ್ಷರಾಗಿ ಆನಂದ್ ಕುಮಾರ್ ಮಾಸಿಕ ಸಂಬಳವನ್ನು ಪಡೆದಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.