ಬದಿಯಡ್ಕ: ನೀರ್ಚಾಲು ಸಮೀಪದ ಪುದುಕೋಳಿ ತರವಾಡಿನಲ್ಲಿ ಮಂಗಳವಾರದಿಂದ ವಾರ್ಷಿಕ ಧರ್ಮನೇಮೋತ್ಸವ ಆರಂಭಗೊಂಡಿತು.
ಮಂಗಳವಾರ ಸಂಜೆ 8 ಕ್ಕೆ ಶ್ರೀದುರ್ಗಾಪೂಜೆ, ದೈವಗಳ ತೊಡಂಙಲ್, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಬುಧವಾರ ಮುಂಜಾನೆ 5 ರಿಂದ ಈರ್ವರು ಉಳ್ಳಾಕ್ಲುಗಳ ನೇಮ ನಡೆಯಿತು. ಬಳಿಕ ಶ್ರೀಧೂಮಾವತಿ ದೈವಗಳ ನೇಮ, ಧರ್ಮದೈವ ಪಂಜುರ್ಲಿ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.