HEALTH TIPS

ಪಾಲಕ್ಕಾಡ್ ಮುಂಡೂರಿನಲ್ಲಿ ಕಾಡಾನೆ ದಾಳಿಗೆ ಯುವಕ ಸಾವು: ಜೊತೆಗಿದ್ದ ತಾಯಿಗೆ ಗಾಯ .

ಪಾಲಕ್ಕಾಡ್: ಮುಂಡೂರಿನಲ್ಲಿ ಕಾಡಾನೆಯ ದಾಳಿಗೆ ಯುವಕನೊಬ್ಬ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯನ್ನು ಕೈರಾಮ್‍ಕೋಡ್ ಮೂಲದ ಅಲನ್(28) ಎಂದು ಗುರುತಿಸಲಾಗಿದೆ. 

ಘಟನೆಯ ಸಮಯದಲ್ಲಿ ಅಲನ್ ಜೊತೆಗಿದ್ದ ಅವರ ತಾಯಿ ವಿಜಿ ಗಾಯಗೊಂಡಿರುವರು. ನಿನ್ನೆ ರಾತ್ರಿ 7.45ರ  ಸುಮಾರಿಗೆ ಈ ಘಟನೆ ನಡೆದಿದೆ.

ಕಾಡಾನೆ ಹಿಂದಿನಿಂದ ದಾಳಿ ಮಾಡಿರುವುದಾಗಿ ಹೇಳಲಾಗಿದೆ.  ಅಲನ್‍ನ ಎದೆಗೆ ಆಳವಾದ ಇರಿತವಾಗಿದೆ. ಅಲನ್ ಸ್ಥಳದಲ್ಲೇ ಮೃತಪಟ್ಟರು.

ಈ ದಾಳಿ ಕನ್ನಡಂಚೋಲೆ ಬಳಿ ನಡೆದಿದೆ. ತಾಯಿ ಮತ್ತು ಪುತ್ರ ಪೇಟೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಕಾಡಾನೆ ದಾಳಿ ಮಾಡಿ ಈ ಅವಘಡ ಉಂಟಾಗಿದೆ. ಗಾಯಗೊಂಡ ಅಲನ್ ತಾಯಿ ವಿಜಿ ಅವರನ್ನು ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಅಲನ್ ಚರ್ಚ್ ಪಾದ್ರಿಯಾಗುವ ವ್ಯಾಸಂಗದಲ್ಲಿದ್ದರು ಎಂದು ತಿಳಿದುಬಂದಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries