HEALTH TIPS

ಅಡ್ಕತ್ತಬೈಲ್ ಹೊಸಮನೆ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ-ಗೊನೆ ಮುಹೂರ್ತ

ಕಾಸರಗೋಡು: ಅಡ್ಕತ್ತಬೈಲ್ ಹೊಸಮನೆ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಪುನ:ಪ್ರತಿಷ್ಠಾ ವಾರ್ಷಿಕ ದಿನಾಚರಣೆ, ಬ್ರಹ್ಮಬಲಿ ಮತ್ತು ಬೈದರ್ಕಳ ನೇಮೋತ್ಸವಕ್ಕಾಗಿ ಗೊನೆ ಮುಹೂರ್ತ ಶುಕ್ರವಾರ ನಡೆಯಿತು. ಕಾರ್ಯಕ್ರಮಕ್ಕೂ ಮೊದಲು ಬೆಳಗ್ಗೆ ಗಣಪತಿ ಹೋಮ ನಡೆಯಿತು. ಅಡ್ಕತ್ತಬೈಲು ಹೊಸಮನೆ ತರವಾಡು ಪ್ರಮುಖರು, ಭಕ್ತಾದಿಗಳು ಪಾಲ್ಗೊಂಡಿದ್ದರು.

ಏ. 10ರಂದು ಬೆಳಗ್ಗೆ ಪುನ:ಪ್ರತಿಷ್ಠಾ ವಾರ್ಷಿಕ ದಿನಾಚರಣೆ ಅಂಗವಾಗಿ ಬೆಳಗ್ಗೆ 7ಕ್ಕೆ ಗಣಪತಿ ಹೋಮ, ಕಲಶಪೂಜೆ, ಮುಡಿಪು ಶುದ್ಧಿ, ಬ್ರಹ್ಮೆರ್‍ಮ ದೇಯಿ ಬೈದ್ಯೆತಿ, ಕೋಟಿ-ಚೆನ್ನಯ ಹಾಗೂ ಇತರ ದೈವಗಳಿಗೆ ಪೂಜೆ, ಭಜನೆ, ರಾತ್ರಿ 8ಕ್ಕೆ ಗುಳಿಗ, ಕೊರತಿ ದೈವಗಳ ಕೋಲ ನಡೆಯುವುದು.11ರಂದು ಸಂಜೆ 6ಕ್ಕೆ ಬೈದರ್ಕಳ ಪ್ರದರ್ಶನ, 7ಕ್ಕೆ ಬ್ರಹ್ಮ ಬಲಿ ಮತ್ತು ಬೈದರ್ಕಳ ರಂಗಸ್ಥಳ ಇಳಿಯುವುದು, ರಆತ್ರಿ 12ಕ್ಕೆ ಆಯುಧ ಒಪ್ಪಿಸುವಿಕೆ, 12ರಂದು ಬೆಳಗ್ಗೆ 3ಕ್ಕೆ ಮಾಯಾಂದಳ ದೇವಿಯ ಪ್ರದರ್ಶನ, ಬೈದರ್ಕಳ ಸಏಟ್, ಮುಡಿಗಂಧ ಪ್ರಸಾದ ವಿತರಣೆ ನಡೆಯುವುದು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries