ನವದೆಹಲಿ: ವಕ್ಫ್(ತಿದ್ದುಪಡಿ) ಮಸೂದೆ'ಗೆ ಪ್ರಬಲ ವಿರೋಧ ವ್ಯಕ್ತಪಡಿಸಿರುವ ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಮಸೂದೆಯನ್ನು ವಿರೋಧಿಸಿರುವ ಅವರು, ಇದು ಮುಸ್ಲಿಮರ ಮೇಲಿನ ನೇರ ಹಲ್ಲೆಯಾಗಿದ್ದು, ಅವರ ಆಸ್ತಿಗಳನ್ನು ಕಿತ್ತುಕೊಳ್ಳಲಿದೆ ಎಂದು ಗುರುವಾರ ಆರೋಪಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ವಕ್ಫ್ ಮಸೂದೆ ಮೂಲಕ ನಮ್ಮ ಎದೆಗೆ ಗುಂಡು ಹಾರಿಸುತ್ತಿದ್ದಾರೆ. ಮಸೀದಿ ದರ್ಗಾಗಳನ್ನು ಗುರಿಯಾಗಿಸುತ್ತಿದ್ದಾರೆ ಎಂದು ಓವೈಸಿ ದೂರಿದ್ದರು.
ಮಸೂದೆಯಲ್ಲಿ ವಕ್ಫ್ ಆಸ್ತಿ ಹೌದೋ ಅಲ್ಲವೋ ಎಂಬುದನ್ನು ಪ್ರಮಾಣೀಕರಿಸುವ ಅವಕಾಶ ಜಿಲ್ಲಾಧಿಕಾರಿಗೆ ನೀಡಿದ್ದು ಮುಸ್ಲಿಮರು ತಮ್ಮ ಆಸ್ತಿ ಕಳೆದುಕೊಳ್ಳಲಿದ್ದಾರೆ. ಇದು ಹಿಂದುತ್ವದ ಕಾರ್ಯಸೂಚಿ. ಮಸೂದೆ ಬಗ್ಗೆ ಮುಸ್ಲಿಮರು ಮೌನವಾಗಿ ಕೂರಲ್ಲ ಎಂದು ಹೇಳಿದ್ದರು.
ಮುಸ್ಲಿಮರಿಗೆ ಹಿಂದೂ, ಸಿಖ್, ಕ್ರಿಶ್ಚಿಯನ್ ಮತ್ತು ಆರ್ಎಸ್ಎಸ್ ಸಂವಿಧಾನ, ಅದರ ಸಿದ್ದಾಂತ, ಮೋದಿ, ಯೋಗಿ ನಿಜವಾದ ಶತ್ರುಗಳು ಎಂದು ಓವೈಸಿ ಹೇಳಿದರು.